Friday, May 14, 2021

ಬಸವಣ್ಣ ವಚನಕಾರ ಅಷ್ಟೇ ಅಲ್ಲ

ಬಸವಣ್ಣ ಒಬ್ಬ ವಚನಕಾರ ಅಲ್ಲ. ತಮ್ಮೊಳಗೆ ಅನುಭವಿಸಿದ ದಿವ್ಯ ಅನುಭೂತಿಯನ್ನು ವ್ಯಕ್ತಪಡಿಸಲು, ವಚನ ಅವರು ಆಯ್ದುಕೊಂಡ ಸಾಧನ ಅಷ್ಟೇ.

ಬಸವಣ್ಣ ಒಬ್ಬ ರಾಜನಾಗಿದ್ದರೂ, ಅಧ್ಯಾತ್ಮದ ಮಹತ್ವವನ್ನು ಅರಿತು ಅದನ್ನು ಜೀವಿಸಿ, ಪ್ರಜೆಗಳ ಯೋಗಕ್ಷೇಮವನ್ನೂ ನೋಡಿಕೊಂಡಿದ್ದು ಒಂದು ಶ್ರೇಷ್ಠ ಉದಾಹರಣೆ. 

ಬಸವಣ್ಣನಾಗಲೀ, ಕೃಷ್ಣನಾಗಲೀ, ಜೀಸಸ್ ಆಗಲೀ, ರಮಣರಾಗಲೀ, ರಾಮಕೃಷ್ಣರಾಗಲಿ - ಇವರನ್ನು ನಾವು ದೇವರೆಂದು ಹಣೆಪಟ್ಟಿ ಹಾಕಿ ಪಕ್ಕಕ್ಕೆ ಸರಿಸಿಬಿಟ್ಟರೆ, ಅವರೆಲ್ಲ ಸಾರಿದ ಸಂದೇಶಕ್ಕೆ ಅಪಮಾನ ಮಾಡಿದಂತೆ. ಜೀವನದುದ್ದಕ್ಕೂ ಇವರೆಲ್ಲ ಸಾರಿದ್ದು, ಪ್ರಯತ್ನಿಸಿದರೆ ನಾವೂ ಅವರಂತೆ ಆಗಬಹುದು ಎಂಬುದನ್ನು. ನಮ್ಮ ಚಿಕ್ಕ ಪುಟ್ಟ ಮಿತಿಗಳನ್ನು ಮೀರಿ ಬದುಕಬಹುದೆಂದು. ಪ್ರೇಮಮಯಿಗಳಾಗಿ, ಪ್ರಜ್ಞಾಪೂರ್ವಕ ಜೀವಿಗಳಾಗಿ, ಜಗತ್ತಿನಲ್ಲೊಂದು ಬೆಳಕಾಗಿ ಬದುಕಲು ಪ್ರತಿಯೊಬ್ಬರಿಗೂ ಸಾಧ್ಯವಿದೆ ಎಂದು. ‘ಜಂಜಾಟಗಳೇ ಬದುಕು’ ಎಂದುಕೊಂಡಿದ್ದ ಜನರಿಗೆ ಅವರು ತಿಳಿಸಿಕೊಟ್ಟಿದ್ದು ಜಂಜಾಟಗಳನ್ನು ಮೀರಿ ಬದುಕಬಹುದು ಎಂದು.

ಬಸವಣ್ಣನವರ ವಚನಗಳು ಕೇವಲ ಓದಿಗಷ್ಟೇ ಸೀಮಿತವಾಗದೆ, ಅವರು ತಮ್ಮೊಳಗೆ ಅನುಭವಿಸಿ ಅನೂಭೂತಿಯೆಡೆಗೆ ಹೆಜ್ಜೆಯಿಡಲು ನಮಗೆಲ್ಲ ಸ್ಫೂರ್ತಿಯಾಗಲಿ  🙏

#ಬಸವ_ಜಯಂತಿ



 

ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...