Monday, November 2, 2020

‘ದೇವಿ’ ಕೇವಲ ಒಂದು ನಂಬಿಕೆ ಅಷ್ಟೇ ಅಲ್ಲ!



ದೇವಿ ಆರಾಧನೆ - ಇದು ಭಾರತದಲ್ಲಿ ಮಾತ್ರ ಇನ್ನೂ ಜೀವಂತವಿರುವ ಪರಂಪರೆ.

ಭಾರತದ ಮೂಲೆಮೂಲೆಗಳಲ್ಲಿ, ಪ್ರತೀ ಹಳ್ಳಿಯಲ್ಲಿ, ಅದೂ ದಕ್ಷಿಣ ಭಾರತದಲ್ಲಿ, ದೇವಿ ಗುಡಿಗಳು, ಆರಾಧನೆಗಳು ಕಾಣಸಿಗುತ್ತವೆ. ಸ್ತ್ರೀತತ್ವದ ಅಭೂತಪೂರ್ವ ಮಹತ್ವವನ್ನು ಹಾಗೂ ಅವಶ್ಯಕತೆಯನ್ನು ಅರಿತ ಪ್ರಪ್ರಥಮ ಸಂಸ್ಕೃತಿಗಳಲ್ಲಿ ಒಂದು.

ಇದು ಕೇವಲ ನಂಬಿಕೆಯೇ? ಒಂದಷ್ಟು ಜನ ಮೂಢವಾಗಿ ಪಾಲಿಸಿಕೊಂಡುಬಂದಿರುವ ಒಂದು idea ಅಷ್ಟೇನಾ? ಖಂಡಿತ ಅಲ್ಲ.

ದೇವಿ ಗುಡಿಗಳು, ಅತ್ಯಂತ ಸೂಕ್ಕ್ಷ್ಮರೀತಿಯಲ್ಲಿ ಪ್ರತಿಷ್ಠೆಯಾಗಿರುತ್ತಿದ್ದವು. ಈ ಹಳ್ಳಿಯಲ್ಲಿ ಒಂದು ಗ್ರಾಮದೇವತೆಯಿದ್ದರೆ, ಪಕ್ಕದ ಹಳ್ಳಿಯಲ್ಲಿ ಇನ್ನೊಂದು. ಇದು ಕೇವಲ ಜನರ ಮನಸ್ಸಿನ ಒಂದು ನಂಬಿಕೆ ಅಷ್ಟೇ ಅಲ್ಲ. ಆ ಆ ಹಳ್ಳಿಯ ಅವಶ್ಯಕತೆಗೆ ತಕ್ಕಂತೆ, ದೇವಿಗುಡಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. This Nation knows the technology of God Making. ದೇವರನ್ನು ಪ್ರತಿಷ್ಠಾಪಿಸುವ ಸಂಪೂರ್ಣ ವಿಜ್ಞಾನ ಈ ದೇಶದ ಋಷಿ ಮುನಿಗಳಿಗೆ, ಯೋಗ ಪರಂಪರೆಗೆ ತಿಳಿದಿತ್ತು.

ಹೀಗೆ ಪ್ರತಿಷ್ಠಾಪಿಸಿದ ದೇವತೆ, ಅದ್ಭುತವಾಗಿ ಕೆಲಸ ಮಾಡುತ್ತಿತ್ತು ಕೂಡ. ಚಾಮುಂಡೇಶ್ವರಿ, ಮೈಸೂರಿನ ಸುರಕ್ಷತೆಗೆ ಸ್ಥಾಪಿಸಲ್ಪಟ್ಟ ದೇವತೆ ಎಂಬ ನಂಬಿಕೆ ರಾಜಮನೆತನದಲ್ಲಿ ಇತ್ತು. ಇಡೀ ಭಾರತ ಬ್ರಿಟೀಷರ ಕಪಿಮುಷ್ಟಿಯಲ್ಲಿ ನಡುಗಿದರೂ, ಪಕ್ಕದ ಶ್ರೀರಂಗಪಟ್ಟಣದಲ್ಲೇ ಟಿಪ್ಪುವಿದ್ದರೂ, ಮೈಸೂರನ್ನು ಮುಟ್ಟಲಾಗಲಿಲ್ಲ. ಗ್ರಾಮದೇವತೆ ಸಂಸ್ಥಾನವನ್ನು ಕಾಯ್ದು ಹರಸಿದ್ದಳು.

ಶ್ರೀನಿವಾಸ ರಾಮಾನುಜಮ್ ನಿಮಗೆಲ್ಲ ತಿಳಿದಿರಲೇಬೇಕು. ಭಾರತ ಏನು, ವಿಶ್ವವೇ ಕಂಡ ಅದ್ಭುತ ಗಣಿತಜ್ಞ. ರಾಮಾನುಜಮ್ ಬಿಡಿಸುತ್ತಿದ್ದ ಗಣಿತ ವ್ಯಾಖ್ಯಾನಗಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿ ಹೋಗಿತ್ತು. ಪಾಶ್ಚಾತ್ಯ ಗಣಿತಜ್ಞರಿಗೆ ಮನುಷ್ಯರಿಗೆ ಇಂಥದ್ದು ಸಾಧ್ಯ ಎಂದೇ ಗೊತ್ತಿರಲಿಲ್ಲ. ಥಿಯರಿಯೂ ರೆಡಿಯಿರದಿದ್ದ, ವಿಜ್ಞಾನ ಪ್ರಪಂಚದಲ್ಲಿ ಇನ್ನೂ conceptualization ಕೂಡ ಆಗದಿದ್ದ ‘ಬ್ಲಾಕ್ ಹೋಲ್’ ಮುಂತಾದ ವಿಷಯಗಳ ಗಣಿತ ಸಮೀಕರಣವನ್ನು, ರಾಮಾನುಜಮ್ 20ನೇ ಶತಮಾನದ ಆದಿಯಲ್ಲೇ ಬಿಚ್ಚಿಡಲು ಪ್ರಾರಂಭಿಸಿದ್ದರು. ಈತ ಗಣಿತವನ್ನು ಬರೆಯುತ್ತಿರಲಿಲ್ಲ, ಸುರಿಯುತ್ತಿದ್ದರು.

ಕುತೂಹಲ ತಡೆಯಲಾರದ ಗಣಿತ ವಿದ್ವಾಂಸರು, “ರಾಮನುಜಮ್, ಇದು ಹೇಗೆ ಸಾಧ್ಯ?” ಎಂದು ಕೇಳಿದಾಗ, ರಾಮಾನುಜಮ್ ಹೇಳಿದ್ದಿಷ್ಟು: My Devi Bleeds Mathematics!

“ನನ್ನ ದೇವಿ ಗಣಿತವನ್ನು ಹರಿಸುತ್ತಾಳೆ!”

ಇದು ಭಾರತದಲ್ಲಿ ಆಗಿಹೋದ ಅನೇಕ ಜ್ಞಾನಿಗಳ, ವಿಜ್ಞಾನಿಗಳ ವಿಷಯದಲ್ಲಿ ನಿಜ. ಈಗಿನವರಲ್ಲ, ಪುರಾತಕಾಲದ ವಿಜ್ಞಾನಿಗಳ ಕುರಿತು ಹೇಳಿದ್ದು.

ಈ ವಿಜ್ಞಾನ ನಮ್ಮಲ್ಲಿ ಕ್ಷೀಣಿಸುತ್ತಿರುವುದು, ನಾವು ಪಾಶ್ಚಾತ್ಯರಿಗಿಂತ ಪಾಶ್ಚಾತ್ಯರ ರೀತಿಯಲ್ಲಿ ಆಡುತ್ತಿರುವುದು, ಮೂರ್ಖತನವಲ್ಲದೇ ಮತ್ತೇನು ಅಲ್ಲ.

ವಿಜಯದಶಮಿ ನಮಗೆ ವಿಜಯವನ್ನು ತರಲಿ.

ಬೇಕಾಗಿರುವುದು ಎರಡು ದಿನದ ಕ್ರೋಧವಲ್ಲ!


ದಲಿತ ಎಂಬ ಕಾರಣಕ್ಕೆ ಅಲ್ಲ, ಮಹಿಳೆ ಎಂಬ ಕಾರಣಕ್ಕೆ ಅಲ್ಲ, ಮಗು ಎಂಬ ಕಾರಣಕ್ಕೆ ಅಲ್ಲ, ತನಗಿಂತ ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಅಥವಾ ಇನ್ಯಾವುದೇ ಸ್ಥರದಲ್ಲಿ ಬಲಹೀನರಾಗಿರುವ ಯಾರನ್ನೇ ಆದರೂ exploit ಮಾಡುವುದು ಮನುಷ್ಯನ ಸ್ವಭಾವೇ ಆಗಿ ಹೋಗಿದೆ.

ನೀವು ಇದನ್ನು ಎಲ್ಲೆಲ್ಲೂ ನೋಡಬಹುದು. ಬೀದಿಬದಿಯ ಅಂಗಡಿಗಳಿಂದ ಕಾರ್ಪೋರೇಟ್ ಆಫೀಸುಗಳ ಎಸಿ ರೂಮುಗಳವರೆಗೆ, ಎಲ್ಲೆಲ್ಲೂ ಈ ಸ್ವಭಾವ ಕಾಣಸಿಗುತ್ತದೆ.

ಸ್ವಲ್ಪ ಮಾತುಕಡಿಮೆಯಾಡುವವನಿದ್ದರೆ, ಅಪಹಾಸ್ಯಕ್ಕೆ ಪ್ರತಿಹಾಸ್ಯ ಮಾಡಲು ಬರದ ವ್ಯಕ್ತಿ ಸಿಕ್ಕರೆ, ಅವನನ್ನು ಯದ್ವಾತದ್ವಾ ಹಾಸ್ಯ ಮಾಡುವ, ಆನಂದ ಪಡುವ ಜನ ಸಿಗುತ್ತಾರೆ. ಗೊತ್ತಿಲ್ಲದೇ ನಾವೂ ಮಾಡಿರುತ್ತೇವೆ. ಆಡಲು ಸರಿಯಾಗಿ ಬರದವ ನಮ್ಮ ಜೊತೆ ಕ್ರೀಡೆಯೊಂದರಲ್ಲಿ ಆಡುತ್ತಿದ್ದರೆ, ಅವನನ್ನು exploit ಮಾಡುತ್ತಿರುತ್ತೇವೆ. ಓದಲು ಸರಿಯಾಗಿ ಬಾರದ ಹುಡುಗನೊಬ್ಬ ಶಾಲೆಯಲ್ಲಿದ್ದರೆ, ಆತನ ಸ್ಠಿತಿ ಅಧೋಗತಿ. ಅಧಿಕಾರದಲ್ಲಿರುವವರು ಅಧಿಕಾರವಿರದವರ ಮೇಲೆ exploit ಮಾಡುತ್ತಿರುತ್ತಾರೆ. ಅಧಿಕಾರವಿಲ್ಲದವನು ನಾಳೆ ಅಧಿಕಾರಕ್ಕೆ ಬಂದರೆ, ಅವನು ಮಾಡುವುದೂ ಅದನ್ನಷ್ಟೇ.

ಮಹಿಳೆಯರ ಮೇಲಾಗಲೀ, ಮಕ್ಕಳ ಮೇಲಾಗಲಿ, ಜಾತಿ ಸಮುದಾಯದ ಮೇಲಾಗಲೀ, ಅಥವಾ ಇನ್ಯಾರ ಮೇಲೇ ಆಗಲಿ, ಅವರು ಶೋಷಣೆಗೊಳಗಾಗುವ ಮೂಲಕಾರಣ ದೈಹಿಕವಾಗೋ, ಸಾಮಾಜಿಕವಾಗೋ, ಮತ್ತೊಂದೋ, ಅವರು ಶೋಷಿಸಿದವರಷ್ಟು ಬಲಶಾಲಿ ಅಲ್ಲ ಎಂಬುದಷ್ಟೇ.

ಮನುಷ್ಯನ ಈ ಸ್ವಭಾವದ ಮೇಲೆ ಸಮಾಜ ಕೆಲಸ ಮಾಡಬೇಕು. Exploit ಮಾಡುವ ಅವಶ್ಯಕತೆ ಮನುಷ್ಯನಿಗೆ ತೋರದ ರೀತಿಯಲ್ಲಿ ಆತನಲ್ಲಿ ಗುಣ ಸ್ವಭಾವಗಳು ಬೆಳೆಯುವಂತೆ ಮಾಡಬೇಕು. ‘ನಾನು ಓದುವುದರಲ್ಲಿ ಮುಂದಿರಬಹುದು, ಮತ್ತೊಬ್ಬ ಆಟದಲ್ಲಿರಬಹುದು. ಸಾಮಾಜಿಕವಾಗಿ ಯಾರ್ಯಾರೋ ಯಾವ್ಯಾವುದೋ ಸ್ಥಿತಿಯಲ್ಲಿ ಇರಬಹುದು. ಆರ್ಥಿಕವಾಗಿ ನನಗಿಂತ ಕೆಳಗಿನ ಸ್ಥಿತಿಯಲ್ಲಿ ಯಾರೋ ಇರಬಹುದು. ಆದರೆ ನನಗೆ ಯಾರನ್ನೂ ಶೋಷಿಸುವ ಅಥವಾ exploit ಮಾಡುವ ಅವಶ್ಯಕತೆ ಕಾಣದಂತೆ ನನ್ನ ಮಾನಸಿಕ ಮತ್ತು ಭಾವನಾತ್ಮಕ ಶಿಕ್ಷಣ ಇರಬೇಕು. ಯಾರು ಯಾವ ಸ್ಥಿತಿಯಲ್ಲೇ ಇರಲಿ, ಅವರನ್ನು ಮೇಲೆ ತರಲು ನನಗೆ ಸಾಧ್ಯವಾಗುತ್ತೋ ಇಲ್ಲೋ ಬೇರೆ ವಿಷಯ, ಆದರೆ ನನಗೆ ಅವರನ್ನು ಶೋಷಿಸುವ ಯಾವುದೇ ಅವಶ್ಯಕತೆ ಇಲ್ಲ’. ಈ ಮನಸ್ಠಿತಿ ಸಮಾಜದ ಪ್ರತೀ ವ್ಯಕ್ತಿಯಲ್ಲೂ ಬೆಳೆಯುವಂತೆ ಮಾಡಬೇಕು.

ಇದನ್ನು ನಾಳೆ ಬೆಳಗಾಗುವುದರಲ್ಲಿ ಮಾಡಲು ಸಾಧ್ಯವೇ? ಖಂಡಿತ ಇಲ್ಲ. ಹಾಗಂತ, ಇದು ಕೇವಲ ಪುಸ್ತಕದ ಮಾತೇ? ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ.

ಶಿಕ್ಷಣ ಹೇಗಾಗಿಹೋಗಿದೆ ಎಂದರೆ, ಪುಸ್ತಕದ ಕಂತೆ ಸೇರಿಸಿ, ‘ಇಷ್ಟನ್ನು ಓದಿದರೆ ನೀನು ಗೆದ್ದಂತೆ, ಜಗತ್ತಿನಲ್ಲಿ ಹೇಗೆ ಬೇಕಾದರೂ ಇರು’ ಎಂಬ ವ್ಯವಸ್ಥೆ. ಮಕ್ಕಳ ಮಾನಸಿಕ, ದೈಹಿಕ, ಆಧ್ಯಾತ್ಮಿಕ ಹಾಗೂ ಸರ್ವತೋಮುಖ ದೃಢತೆಗೆ ಅಲ್ಲಿ ಯಾವ ಲಕ್ಷ್ಯವೂ ಇದ್ದಂತಿಲ್ಲ. ಒಂದು ಉದ್ಯಾನವನವಿದೆ ಎಂದುಕೊಳ್ಳಿ. ಒಂದಷ್ಟು ಗಿಡ ಬೆಳೆಸುತ್ತಿರುವಿರಿ. ನಾನು ಗಿಡಗಳಿಗೆ ಸೂರ್ಯನ ಬೆಳಕನ್ನು ಮಾತ್ರ ಕೊಡುತ್ತೇನೆ, ನೀರು ಹಾಕುವುದಿಲ್ಲ, ನೀರನ್ನು ಮಾತ್ರ ಹಾಕುವೆ, ಬುಡದಲ್ಲಿ ಮಣ್ಣನ್ನು ಒದಗಿಸುವುದಿಲ್ಲ ಎಂದರೆ ಗಿಡಗಳು ಬೆಳೆಯುತ್ತವೆಯೇ? ಅದರಲ್ಲಿ ಸುಂದರ ಹೂವುಗಳು ಅರಳುತ್ತವೆಯೇ? ನಾವು ನಮ್ಮ ಮಕ್ಕಳಿಗೆ ಮಾಡುತ್ತಿರುವುದು ಅದನ್ನೇ!

ಇರಲಿ. ಸಮಾಜದಲ್ಲಿ ಅಹಿತಕರ ಘಟನೆಗಳಾದಾಗ ಹೊಯ್ದುಕೊಳ್ಳುವ ನಾವೆಲ್ಲರೂ ಉಳಿದ ದಿನಗಳು ಮಲಗಿರುತ್ತೇವೆ. ಎರಡು ದಿನ ಹುಯ್ ಹುಯ್ ಎಂದು, ಮತ್ತೆ ಪುನರಾವರ್ತನೆ. ಇದೆಲ್ಲದರಿಂದ ಕ್ಷಣಿಕ ತೃಪ್ತಿ ಸಿಗಬಹುದೇ ಹೊರತು, ಒಂದಷ್ಟು ಕೋಪ ಹೊರಹೋಗಬಹುದೇ ಹೊರತು - ಇವು ಪರಿಣಾಮಕಾರಿ ಪರಿಹಾರವಲ್ಲ. ಪರಿಣಾಮಕಾರಿ ಪರಿಹಾರಗಳು ಎಲ್ಲರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತವೆ. ನಿಯತ್ತನ್ನು ಬಯಸುತ್ತವೆ. ಎರಡು ದಿನದ ಕ್ರೋಧವನ್ನಲ್ಲ.

~ ಸಂಕೇತ್ ಡಿ ಹೆಗಡೆ


‘ಗುರು’ ನಾವಂದುಕೊಂಡಿರುವಂತೆ ಹಳೆಯ ಕಾಲಕಷ್ಟೇ ಸೀಮಿತವೇ?



ಅಷ್ಟಕ್ಕೂ ಇದನ್ನು ಬರೆಯುವ ಆಲೋಚನೆಯಿರಲಿಲ್ಲ. ಏಕೆಂದರೆ, ಯಾರು ಓದುತ್ತಾರೆ ಇದನ್ನೆಲ್ಲ?

ಇಡೀ ದಿನ ಪೊಲಿಟಿಕ್ಸ್ ಮತ್ತೊಂದರಲ್ಲಿ ಮುಳುಗಿಹೋಗಿರುವ ಸೋಷಿಯಲ್ ಮೀಡಿಯಾ ಪ್ರಪಂಚದಲ್ಲಿ ಬಂದು ಗುರುವಿನ ಕುರಿತು ಏನೆಂದು ಬರೆಯಲಿ. ಬರೆದು ಏನು ಸಾಧಿಸೋದು? ಹೇಗೆ ಶುರು ಮಾಡಲಿ, ಹಾಗೂ ಅಷ್ಟೆಲ್ಲ ಹೇಳಲು ’ಗುರು’ವಿನ ಅರ್ಥ ನನಗೆ ಸರಿಯಾಗಿ ಗೊತ್ತೇನು?

ಆದರೂ ಬರೆಯಬೇಕು ಅನ್ನಿಸಿತು. ಏಕೆಂದರೆ, ಸಹಸ್ರಾರು ವರ್ಷಗಳಿಂದ ಗುರು-ಶಿಷ್ಯ ಪರಂಪರೆಯಲ್ಲಿ ಮಿಂದೆದ್ದ ಈ ದೇಶ, ಇಂದು ಇಷ್ಟು ಪ್ರಾಪಂಚಿಕ ಜಂಜಾಟದಲ್ಲಿ ಮುಳುಗಿಹೋಗಿ, ತನ್ನ ತನವನ್ನು ಎಲ್ಲಿ ಚೂರು ಕಳೆದುಕೊಂಡುಬಿಟ್ಟಿದೆಯೇನೋ ಎಂಬ ಭಯ.

ನಾವು ಇಂದು ಎಲ್ಲದಕ್ಕೂ ಗುರು ಎನ್ನುತ್ತೇವೆ. ಮಾರ್ಕೆಟಿಂಗ್-ಗುರು, ಮ್ಯಾನೇಜ್ ಮೆಂಟ್ ಗುರು, ಟೆಕ್ ಗುರು, ಆ ಗುರು, ಈ ಗುರು, ಒಟ್ಟಿನಲ್ಲಿ ಎಲ್ಲವೂ ಗುರು. ಕೆಲವರು ಇನ್ನೊಂದು ಹಾದಿಯಲ್ಲಿ ನನಗೆ ಪಾಠ ಮಾಡಿದ ಶಿಕ್ಷಕರು ಗುರು ಎಂದೋ, ಅಥವಾ ಇನ್ಯಾರೋ ಹಿರಿಯರು ಗುರು ಎಂದೋ ತಿಳಿದು ಪ್ರಕಟಿಸುತ್ತಿರುತ್ತಾರೆ.

ಆದರೆ ಈ ಗುರುಪೂರ್ಣಿಮೆ, ಇದ್ಯಾವುದರ ಕುರಿತೂ ಅಲ್ಲ. ಇದು ನಿಮ್ಮ ಶಿಕ್ಷಕರಿಗೆ ಶುಭಾಶಯ ಕೋರುವ ದಿನವಲ್ಲ. ಅಥವಾ ಮರೆತುಹೋಗಬಹುದಾದ ಮತ್ತೊಂದು ಹಬ್ಬ ಕೂಡ ಅಲ್ಲ.

ಗುರು ಪೂರ್ಣಿಮೆ, summer solstice ಮುಗಿದ ನಂತರ ಬರುವ ಅಂದರೆ ಆಷಾಢದ ಪ್ರಥಮ ಪೂರ್ಣಿಮೆ. ಇದರ ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ದಿನ, ಆದಿಯೋಗಿ ಶಿವ, ಏಳು ಋಷಿಗಳಿಗೆ, ಮಾನವ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆಂತರಿಕ ಜ್ಞಾನ ಅಥವಾ ಯೋಗ ವಿಜ್ಞಾನವನ್ನು ಧಾರೆ ಎರೆಯಲು ಶುರುಮಾಡಿದ. ಆ ಏಳು ಋಷಿಗಳನ್ನು ಸಪ್ತರ್ಷಿಗಳು ಎಂದು ಕರೆಯುತ್ತೇವೆ.

ಈ ಸಪ್ತರ್ಷಿಗಳು, ಅಂದರೆ ವಸಿಷ್ಠ, ಅಗಸ್ತ್ಯ, ಭೃಗು ಮುಂತಾದವರು ಈ ವಿಜ್ಞಾನವನ್ನು ಅತ್ಯಂತ ಜಾಗರೂಕತೆಯಿಂದ ವಿಶ್ವದ ಮೂಲೆಮೂಲೆಗೆ ಹರಡಿದರು. ಇಂದು ನಾವು ನೋಡಬಹುದಾದ ಅನೇಕ ಆಧ್ಯಾತ್ಮಿಕ ಪ್ರಕ್ರಿಯೆಗಳಲ್ಲಿ ಇವರ ಕೊಡುಗೆ ಸಾಕಷ್ಟಿದೆ.

ಇಲ್ಲಿಂದ ಶುರುವಾದ ಗುರು-ಶಿಷ್ಯ ಪರಂಪರೆ, ಭಾರತದ ಇತಿಹಾಸದುದ್ದಕ್ಕೂ ಒಂದು ರೋಮಾಂಚನಾಕಾರಿ ಸಂಗತಿ. ಗುರುವನ್ನು ಅತ್ಯಂತ ಶ್ರೇಷ್ಠನೆಂದೂ, ಜ್ಞಾನಿಯೆಂದೂ ಪರಿಗಣಿಸಲಾಗುತ್ತಿತ್ತು. ಆತನ ಮಾತುಗಳಿಗೆ ಅಷ್ಟು ತೂಕ ಮತ್ತು ಸನ್ಮಾನ ಇರುತ್ತಿತ್ತು.

ಏಕೆಂದರೆ ಬದುಕಿನಲ್ಲಿ ನಾವೇನೇ ಮಾಡುತ್ತಿರಬಹುದು. ಕೂಲಿ ಮಾಡುತ್ತಿರಬಹುದು ಅಥವಾ ರಾಜ್ಯವಾಳುತ್ತಿರಬಹುದು, ನಾವು ಅರಿತುಕೊಳ್ಳಬೇಕಾಗಿರುವ ಸಂಗತಿಯೆಂದರೆ ನಾವಿಲ್ಲಿ ಕ್ಷಣಿಕ. ಇವತ್ತು ಹುಟ್ಟಿ ನಾಳೆ ಸಾಯುತ್ತೇವೆ. ಹೌದು, ನಾವು ನಮ್ಮ ಬಗ್ಗೆಯೇ ಏನೇನೆಲ್ಲ ಅಂದುಕೊಂದಿರಬಹುದು. ಹಾಗೆ-ಹೀಗೆ ಎಂಬ ಅಭಿಪ್ರಾಯಗಳನ್ನಿಟ್ಟುಕೊಂಡಿರಬಹುದು. ಶ್ರೇಷ್ಟ-ಕನಿಷ್ಠ ಎಂಬ ಭಾವನೆಗಳಿರಬಹುದು. ಆದರೆ ನಾವೆಲ್ಲ ಇಲ್ಲಿ ಬದುಕಿರುವುದು ಕ್ಷಣಿಕ ಮಾತ್ರ. ಇದನ್ನು ಜನ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಈ ಹುಟ್ಟು-ಸಾವನ್ನು ಮೀರಿದ ಸಂಗತಿಯ ಬಗ್ಗೆ ಜನಕ್ಕೆ ಸಹಜ ಕುತೂಹಲವಿತ್ತು. ಈ ಚಕ್ರವನ್ನು ಮೀರಬೇಕೆಂಬ ತುಡಿತವಿತ್ತು. ಆದ್ದರಿಂದಲೇ ಈ ಸಂಸ್ಕೃತಿಯಲ್ಲಿ ’ಮುಕ್ತಿ, ಮೋಕ್ಷ’ ಎಂಬ ಪದಗಳಿಗೆ ಅಷ್ಟು ಮಹತ್ವವಿದ್ದುದ್ದು. ಜನರಿಗೆ ಅದನ್ನು ಹೊಂದಬೇಕೆಂಬ, ಸ್ವತಂತ್ರವಾಗಬೇಕೆಂಬ ಹಂಬಲವಿತ್ತು.

ಆದ್ದರಿಂದ ’ಗುರು’ ಅತ್ಯಂತ ಪ್ರಮುಖ ವ್ಯಕ್ತಿಯಾದ. ಆತ ಅಲ್ಲಿಗೆ ತಲುಪಿದ್ದ. ಹೇಗೆ ನಡೆಯಬೇಕು, ಯಾವ ದಾರಿ ಸುಲಭ, ಎಲ್ಲಿ ಬಾಗಬೇಕು, ಎಲ್ಲಿ ನಿಲ್ಲಬೇಕು, ಹೇಗೆ ಕರೆದುಕೊಂಡು ಹೋಗಬೇಕು ಎಂದು ಆತನಿಗೆ ತಿಳಿದಿತ್ತು. ಆತ ಹೇಳಿದ್ದು ಶಿರಸಾವಹಿಸಿ ಪಾಲಿಸಬೇಕಾದ ವಾಕ್ಯವಾಗಿತ್ತು.

ಈ ನೆಲದಲ್ಲಿ ಸಹಸ್ರಾರು ಗುರುಗಳು ಬಂದುಹೋದರು. ಆತ್ಮಜ್ಞಾನಿಗಳು ಸೃಷ್ಟಿಯಾದರು. ಆಧ್ಯಾತ್ಮಿಕ ಪ್ರಪಂಚವೇ ಬೆಳೆಯಿತು. ಆದಿಯೋಗಿಯಿಂದ ಶುರುವಾಗಿ, ಸಪ್ತರ್ಷಿಗಳಿಂದ ಮುಂದುವರಿದ ಈ ಪರಂಪರೆ - ವ್ಯಾಸ, ಶುಕ, ಪರಶುರಾಮ, ದತ್ತಾತ್ರೇಯ, ಅಷ್ಟಾವಕ್ರ, ಕೊನೆಗೆ ಶಂಕರರು, ಗೌತಮ ಬುದ್ಧ ಇವರನ್ನೆಲ್ಲ ಒಳಗೊಂಡಿತು. ರಾಮಕೃಷ್ಣ, ರಮಣರೂ ಆಗಿಹೋದರು. ಇವರೆಲ್ಲ ಮುಕುಟಮಣಿಗಳಷ್ಟೇ. ಸಹಸ್ರಾರು ಯೋಗಿಗಳು, ಮಹರ್ಷಿಗಳು, ಗುರುಗಳು ಆಗಿಹೋದರು. ಆಯಾ ಕಾಲದಲ್ಲಿ ಯಾವುದು ಸೂಕ್ತವೋ, ಸಮಾಜಕ್ಕೆ ಏನು ಬೇಕೋ ಎಲ್ಲವನ್ನೂ ಮಾಡಿದರು. ಹಲವರ ಆಧ್ಯಾತ್ಮ ಉನ್ನತಿಗೆ ಕಾರಣರಾದರು. ಆಧ್ಯಾತ್ಮ ಸಂಪತ್ತನ್ನು ವಿವಿಧ ರೀತಿಯಲ್ಲಿ ಬಿಟ್ಟು ಹೋದರು ಕೂಡ.

ಈ ಅಭೂತಪೂರ್ವ ಪರಂಪರೆ, ಈ ದೇಶದ ಪ್ರಜ್ಞೆಯನ್ನು ನಿರ್ಮಿಸಿತ್ತು. ಜೀವನಶೈಲಿಯನ್ನು ರೂಪಿಸಿತ್ತು. ಜನ ತಮ್ಮನ್ನು ತಾವು ನಿಭಾಯಿಕೊಳ್ಳುವಷ್ಟು, ನಗುನಗುತ್ತ ಸುತ್ತಲಿನವರಿಗೂ ಒಳ್ಳೆಯದನ್ನು ಮಾಡುವಷ್ತು ಸಶಕ್ತರಾಗಿದ್ದರು. ಜೀವನದ ಪರಮಗುರಿಯೆಡೆಗೆ ಸಾಗುವಲ್ಲಿ ಜೀವನವನ್ನು ರೂಪಿಸಿಕೊಳ್ಳುತ್ತಿದ್ದರು.

ಒಂದಷ್ಟು ಆಕ್ರಮಣಗಳಾದವು ನೋಡಿ, ಕಳೆದ ಸಾವಿರ ವರ್ಷಗಳಲ್ಲಿ. ಸುಮಾರು ಹತ್ತಿಪ್ಪತ್ತು ಹೊರದೇಶೀ ಆಕ್ರಮಗಳಾಗಿರಬಹುದಲ್ಲ? ಅಥವಾ ಅದಕ್ಕಿಂತ ಹೆಚ್ಚೇ. ಹೋಗುವವರು ಅನೇಕವನ್ನು ಕಿತ್ತುಕೊಂಡು ಹೋದದ್ದು ಹೌದು. ಆದರೆ ನಾವು ಬಿಟ್ಟ ಅನೇಕ ವಸ್ತುಗಳಲ್ಲಿ, ಕೆಲವಷ್ಟು ‘ನಮ್ಮತನ’ ಕೂಡ ಹೌದು. 1947ರ ಸ್ವಾತಂತ್ರ್ಯ ನಂತರವಂತೂ, ನಾವು ಭವ್ಯ ಭಾರತವನ್ನು ಪುನರ್ ನಿರ್ಮಿಸುವ ಕಾರ್ಯಕ್ಕಿಂತ ಹೆಚ್ಚಾಗಿ, ನಮ್ಮ ಕಣ್ಣುಗಳಲ್ಲಿ ಭವ್ಯವಾಗಿ ಕಂಡ ಪಾಶ್ಚಾತ್ಯವನ್ನು ಇಲ್ಲೂ ನಿರ್ಮಿಸುವ ದಿಕ್ಕಿನಲ್ಲೇ ಹೆಜ್ಜೆ ಇಟ್ಟೆವು.

ನಮ್ಮ ಶಿಕ್ಷಣ ಆಂಗ್ಲರ ಮಾದರಿಯದ್ದಾಯಿತು. ಅವರು ಬಿಟ್ಟುಹೋದ ಇತಿಹಾಸವನ್ನೇ ನಮ್ಮ ಮಕ್ಕಳಿಗೆ ಕಲಿಸಿದೆವು. ಇತ್ತೀಚಿಗೆ, ಆರ್ಥಿಕ ಕ್ರಾಂತಿಯ ನಂತರವಂತೂ ಅವರು ತಿನ್ನುವುದನ್ನು ನಾವೂ ತಿನ್ನಲು ಕಲಿತೆವು. ಅವರ ಬಟ್ಟೆಯನ್ನು ನಾವು ಹಾಕತೊಡಗಿದೆವು. ಒಟ್ಟಿನಲ್ಲಿ ಅವರ ಬದುಕನ್ನು ಅವರಿಗಿಂತ ಚೆನ್ನಾಗಿ ನಾವೇ ಬದುಕಲು ಆರಂಭಿಸಿದೆವು!

ಸರಿ. ತಪ್ಪೇನಿಲ್ಲ. ಸಾವಿರ ವರ್ಷಗಳ ಹಿಂದೆ ಬದುಕಿದಂತೆ ಈಗಲೂ ಬದುಕಬೇಕು ಎಂದು ಹೇಳುತ್ತಿಲ್ಲ. ಆದರೆ ನಮ್ಮ ಜೀವನಶೈಲಿ ನಮಗೆ ಸಂತೋಷವನ್ನು ತಂದುಕೊಟ್ಟಿದೆಯೇ? ಎಷ್ಟು ದಿನ ಸಂಪೂರ್ಣ ಆನಂದದಲ್ಲಿ ನಾವು ಕಳೆಯುತ್ತಿದ್ದೇವೆ? ಆರೋಗ್ಯ ತಂದುಕೊಟ್ಟಿದೆಯೇ? ಮಾನಸಿಕ ಸ್ಥಿಮಿತ ತಂದಿದೆಯೇ? ಇವೇ ಇಲ್ಲ ಎಂದ ಮೇಲೆ, ಇದರ ಮುಂದಿನ ಹೆಜ್ಜೆಯಾದ ಆಧ್ಯಾತ್ಮದ ಬಗ್ಗೆ ಮಾತನಾಡಲು ಸಾಧ್ಯವೇ ಇಲ್ಲ.

ನಾವು ಏನೇ ಮಾಡುತ್ತಿರಬಹುದು. ಸಾಫ್ಟ್ವೇರ್ ಇಂಜಿನಿಯರ್ ಆಗಿರಬಹುದು, ಶಿಕ್ಷಕರಾಗಿರಬಹು, ಡಾಕ್ಟರೋ, ವಕೀಲರೋ ಆಗಿರಬಹುದು, ಅಥವಾ ಆಟೋ, ಬಸ್ ಡ್ರೈವರ್ ಆಗಿರಬಹುದು - ಇದ್ದಷ್ಟು ದಿನ ಸಂತೋಷದಿಂದ, ಆರೋಗ್ಯದಿಂದ, ಸುಗಮವಾಗಿ ಬದುಕುವುದು ಮುಖ್ಯವಲ್ಲವೇ? ಆದ್ದರಿಂದ ಇದ್ಯಾವುದೂ ಔಟ್-ಡೇಟೆದ್ ಅಲ್ಲ. ನಮ್ಮ ಹೊರಪ್ರಪಂಚ ಬದಲಾಗಿರಬಹುದು, ಆದರೆ ಆಂತರಿಕ ವಿಜ್ಞಾನ ಹಾಗೇ ಇದೆ. ನಮ್ಮನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ವಿಜ್ಞಾನ ಹಾಗೇ, ಈ ದೇಶದ ಒಡಲಲ್ಲಿ, ನಮಗಾಗಿ ಕಾಯುತ್ತ ಇದೆ.

’ಗುರು’ ಆ ನಿಟ್ಟಿನಲ್ಲಿ ಪ್ರಮುಖನಾಗುತ್ತಾನೆ. ಇರುವ ಮೂರು ದಿನವನ್ನು ಪ್ರಜ್ಞಾಪೂರ್ವಕವಾಗಿ ಹೇಗೆ ಕಳೆಯುವುದು ಎಂಬುದನ್ನು ಅರ್ಥಮಾಡಿಸಲು. ಆ ದಾರಿಯಲ್ಲಿ ಕರೆದೊಯ್ಯಲು. ಅಡೆತಡೆಗಳಿದ್ದರೆ ತನ್ನ ಹೆಗಲ ಮೇಲೆ ಹೊತ್ತು ದಾಟಿಸಲು. ಸದಾ ಪ್ರೀತಿ ತೋರಲು ಹಾಗೂ ನಾವು ನಿದ್ರಿಸದಂತೆ ಹಾಗೇ ಕಠೋರವಾಗಿರಲು. ಮುಳುಗಿಹೋಗಿರುವ, ಚಿಕ್ಕ ಸಂಗತಿಗಳನ್ನು ಪರಮೋನ್ನತ ಅಂದುಕೊಂಡು ನಮ್ಮದೇ ಲೋಕದಲ್ಲಿ ಸಾಗುತ್ತಿರುವ ನಮ್ಮನ್ನು ಬಡಿದೆಬ್ಬಿಸಿ, ಬೆಳಕು ಚೆಲ್ಲಲು. ಒಂದಷ್ಟು ನಗು ತರಲು. ಒಂದಷ್ಟು ಹಗುರಮಾಡಲು.

ಶುಭವಾಗಲಿ. ಗುರುವಿನ ಕೃಪೆ ನಮ್ಮ ಮೇಲಿರಲಿ.

ಮೊನ್ನೆ CEASEFIRE ಎಂದು ಟ್ರಂಪ್ ಟ್ವೀಟ್ ಮಾಡಿದಾಗ ನಂಬಲೇ ಆಗಿರಲಿಲ್ಲ… ಈ ಮನುಷ್ಯ ಸ್ವಲ್ಪ ಎಡವಟ್ಟು ಜಾಸ್ತಿ… ಏನೋ ಮಾಡಿದ್ದಾನೆ… ನಾವು ಒಪ್ಪಿರಲಿಕ್ಕಿಲ್ಲ ಅನ್ನಿಸಿತ್...